Wednesday, March 24, 2010

ಬಿಸಿಲೇ...ಬಿಸಿಲೇ...

ನರಕಕ್ಕೆ ಹೋದ್ರೆ ಕುದಿಯೋ ಎಣ್ಣೇಲಿ ಹಾಕ್ತಾರೆ ಅಂತ ಕೇಳಿ ಮಾತ್ರ ಗೊತ್ತು, ಆದ್ರೆ ಬೆಂಗಳೂರಲ್ಲಿ ಈಗ ಮದ್ಯಾಹ್ನ ಆದ್ರೆ ಸಾಕು ಅದನ್ನ ಅನುಭವಿಸೋ ಹೊತ್ತು...
ಇಷ್ಟು ದಿನ ಅದುಮಿಟ್ಟುಕೊಂಡಿದ್ದ ಕೋಪಾನೆಲ್ಲಾ ಈಗ ಬೆಂಗಳೂರಿನ ಮೇಲೆ ತೆಗೆಯುತ್ತಾ ಇದ್ದಂತಿದೆ ಆ ಸೂರ್ಯ, ಅಷ್ಟು ಸೆಖೆ, ದಗೆ, ಉರಿ ಬಿಸಿಲು. ಜ್ಯಾಕೆಟ್ ಹೆಲ್ಮೆಟ್ ಹಾಕ್ಕೊ೦ಡು ಟ್ರ್ಯಾಫಿಕ್ ಸಿಗ್ನಲ್‌ನಲ್ಲಿ ನಿಂತಕೊನ್ಡಿದ್ರೆ ಮೈಕ್ರೊವೇವ್ ಓವನ್ನಲ್ಲಿ ಇದ್ದಂತ ಅನುಭವ (ಯಾವಾಗ ಕೂತ್ಕೊಂಡು ನೋಡಿದ್ದೆ ಅಂತ ಕೇಳ್ಬೇಡಿ). ನೋಡಕ್ಕೆ ಬೆಂಕಿ ಎಲ್ಲೂ ಕಾಣ್ಸಲ್ಲ ಆದ್ರೆ ಸುಡೋ ಬಿಸಿ ಮಾತ್ರ ತಪ್ಪಲ್ಲಾ, ಜೊತೆಗೆ ಹೊಗೆ ಧೂಳು ಫ್ರೀ ಕೂಡ...

ನಿನ್ನೆ ಬೆಳಿಗ್ಗೆ ಕಿವಿಗೆ ಇಯರ್‌ಫೋನ್ ಹಾಕ್ಕೊ೦ಡು FM ಕೇಳ್ತಾ ಬೈಕಲ್ಲಿ ಆಫೀಸ್ ಗೆ ಹೋಗೋವಾಗ ವಿಧಾನಸೌದದ ಹತ್ರ ದಾರಿದೀಪ ಕೆಂಪಾದವೋ ಎಲ್ಲ ಕೆಂಪಾದವೋ.. ಬೈಕ್ ಆಫ್ ಮಾಡಿ ಹಾಳಾದ ಬಿಸಿಲಿಗೆ ಬೈತಾ ಇರೋವಾಗ FMನ ಹಾಡು ಕೇಳಿ ತಂಪಾದವೋ ಎಲ್ಲ ತಂಪಾದವೋ..ಕನ್ನಡದ ಸೂಪರ್ ಹಿಟ್ ಚಿತ್ರ "ಹುಚ್ಚ"ದ "ಉಸಿರೇ ಉಸಿರೇ..." ಹಾಡು ಬರ್ತಾ ಇತ್ತು. ವಾಹ್ ಎನ್ ಹಾಡು ಅದು!! ಎಷ್ಟು ಸಾರಿ ಕೇಳಿದ್ರೂ ಮತ್ತೂ ಕೇಳ್‌ಬೇಕು ಅನ್ಸುತ್ತೆ. ಪ್ರೇಮ ಕವಿ ಕೆ. ಕಲ್ಯಾಣ್ ಬರೆದ ಆ ಹಾಡನ್ನು ಗುನುಗುತ್ತಾ ಆಫೀಸ್ ಗೆ ಬರೋವಾಗ ಬಿಸಿಲಿನ ಹೊಡೆತಕ್ಕೆ ಲಿರಿಕ್ಸ್ ಚೇಂಜ್ ಆಗ್ಬಿಡೋದೆ??
ಬಿಸಿಲಿಗೆ ಸಮುದ್ರದ ನೀರೆ ಆವಿ ಆಗುತ್ತೆ, ಅರಳಿರೋ ಹೂವೇ ಬಾಡಿ ಹೋಗುತ್ತೆ ಅಂತಾದ್ರಲ್ಲಿ ಒಂದು ಹಾಡಿನ ಲಿರಿಕ್ಸ್ ಚೇಂಜ್ ಆಗೋದು ಯಾವ್ ಲೆಕ್ಕ ಹೇಳಿ..
ಕೊರೆತ ಮೊರೆತ ಎಲ್ಲದಕ್ಕೂ ಫುಲ್ಲ್ ಸ್ಟಾಪ್ ಹಾಕಿ ಹೇಳ್ತೀನಿ ಕೇಳಿ,
"ಉಸಿರೇ ಉಸಿರೇ ಈ ಉಸಿರ ಕೊಲ್ಲ ಬೇಡ.." ಈ ಹಾಡಿನ ಟ್ಯೂನ್ ಗೆ "ಬಿಸಿಲೇ ಬಿಸಿಲೇ.." ಅಂತ ಸುಡೋ ಬಿಸಿಲಿನ ಬಗ್ಗೆ ಮನಸಲ್ಲೇ ಬರ್ಕೊಂಡಿದ್ದ ಹಾಡನ್ನು ಇಲ್ಲಿ ಬ್ಲಾಗಿಸ್ತೀನಿ. ಹಾಡಿ ನೋಡಿ: ಮಜಾ ಮಾಡಿ...



ಬಿಸಿಲೇ ಬಿಸಿಲೇ ಈ ರೀತಿ ಕೊಲ್ಲ ಬೇಡ,
ಬೇಸಿಗೆ ಹೆಸರಲಿ ಸುಡು ಸುಡುತ ಗಿಲ್ಲ ಬೇಡ,
ಬೆವರಲ್ಲೇ ಬೇಯುತಿದೆ ತನುವು,
ಮಳೆಗಾಗಿ ಕಾಯುತಿದೆ ಮನವು,
ತಂಗಾಳಿಏ ಆಲಂಗಿಸು ಈ ದೇಹವಾ ತಂಪಾಗಿಸು,
ಬಾ ಒಂದೇ ಒಂದು ಸಾರಿ ನನ್ನ ಚುಂಬಿಸು..
ಬಿಸಿಲೇ ಬಿಸಿಲೇ ಈ ರೀತಿ ಕೊಲ್ಲ ಬೇಡ,...

ಬಾನಲ್ಲಿ ನಗುತ ಕೂತು ನೇಸರನು,
ಭೂಮಿಯ ನಗುವನ್ನೆಲ್ಲ ಮರೆಸಿಹನು,
ಹೇ ಬಿಸಿಲೆ ಇಲ್ಲಿ ಏನು ಕೆಲಸ ಹೇಳು,
ನೀ ಭುವಿಗೆ ಬರುವ ಮುಂಚೆ ಸ್ವಲ್ಪ ಹೇಳು..

ಭೂಮಿಗೆ ಚಪ್ಪರ ಹಾಕೋ ರೀತಿಯಲಿ,
ಬಣ್ಣದ ಕೊಡೆಯ ಹಿಡಿದೆ ಕೈಯಲ್ಲಿ..
ಕೊಡೆ ಹಿಡಿದಾ ಮರುಕ್ಷಣವೇ - ಮಾಯಾ ಆ ಬಿಸಿಲೂ,
ತಂಗಾಲಿಯೇ ಆಲಂಗಿಸು ಈ ದೇಹವಾ ತಂಪಾಗಿಸು
ಬಾ ಒಂದೇ ಒಂದು ಸಾರಿ ನನ್ನ ಚುಂಬಿಸು

ಬಿಸಿಲೇ ಬಿಸಿಲೇ ಈ ರೀತಿ ಕೊಲ್ಲ ಬೇಡ,
ಬೇಸಿಗೆ ಹೆಸರಲಿ ಸುಡು ಸುಡುತ ಗಿಲ್ಲ ಬೇಡ...

ಲಾ ಲಾ ಲ ಲಾ ಲಾ ಲ (3 ಟೈಮ್ಸ್ ರಿಪೀಟ್:-)

- ನಿಮ್ಮವ

Wednesday, March 10, 2010

ವೃಕ್ಷ ವೇದನೆ

ನಮ್ಮ ಲೈಫ್‌ನ ಅತಿ ದುಃಖದ ದಿನಗಳ ಲೆಕ್ಕ ಹಾಕಿದ್ರೆ ಅದರಲ್ಲಿ ಕಾಲೇಜ್ ನ ಕೊನೆಯ ದಿನಗಳದ್ದು ಸಿಂಹ ಪಾಲೋ ಹುಲಿ ಪಾಲೋ ಇಲಿ ಪಾಲೋ ಇರತ್ತೆ. ಮೂರ್ನಾಲ್ಕು ವರ್ಷ ಜೊತೆಗಿದ್ದ ಗೆಳೆಯರನ್ನ ಬಿಟ್ಟು ಹೋಗೋದು ಅಂದ್ರೆ ತಮಾಷೆನಾ?? ಜೊತೆ ಜೊತೆಗೆ ಆಟ ಊಟ ಓಡಾಟ ಮಾಡುತ್ತಾ ಟೈಮ್ ಸಿಕ್ಕಾಗ ಪಾಟನೂ ಕೇಳುತ್ತಿದ್ದ ದಿನಗಳು ಮುಗಿಯುತ್ತಾ ಬಂದಾಗ ಆಗೋ ಸಂಕಟ ಇದೆಯಲ್ಲಾ ಅದನ್ನಾ ಹೇಳೋದೂ ಕಷ್ಟ, ತಾಳೋದು ಇನ್ನೂ ಕಷ್ಟ. ಏನೂ ಬೇಡ ಅನಿಸೋ ಅಂತ ದಿನಗಳಲ್ಲೂ ಒಂದು ಬುಕ್ ಮಾತ್ರ ಬಿಡಲಾರದ ಬ೦ಟನಂತೆ ಯಾವಾಗಲೂ ನಮ್ ಜೊತೆಗೇ ಇರತ್ತೆ. ಅದೇ ಸ್ಲ್ಯಾಮ್ ಬುಕ್ ಅಂತಾರಲ್ಲಾ. ನಮ್ಮ ಮೆಮೋರೀ ಮೇಲೆ ನಮಗೇ ಡೌಟ್ ಇರೋದ್ರಿಂದಲೋ ಇಲ್ಲಾ ಮುಂದೋಂದ್ ದಿನ ಹಳೆ ನೆನಪುಗಳನ್ನ ಮೇಲಕು ಹಾಕೋ ಆಸೆಯಿಂದಲೋ ಏನೋ, ಗೆಳೆಯರಿಂದ ತಮ್ಮ ಕಾಲೇಜು ದಿನಗಳ ನೆನಪುಗಳನ್ನ ಆ ಸ್ಲ್ಯಾಮ್ 'ಪುಸ್ತಕದಲ್ಲಿ' 'ಪಟ್ಟಿ' ಮಾಡಿಸಿಕೊಳ್ತಾರೆ.

ನಂದೂ ಒಂದು ಬುಕ್ ಇತ್ತು, ಈಗಲೂ ಇದೆ. ಮಾರ್ಕ್ಸ್ ಕಾರ್ಡು ಪಾಸ್‌ಪೋರ್ಟ್ ಕಾದಿಟ್ಟುಕೊಂಡ ಹಾಗೆ ಭದ್ರವಾಗಿ ಇಟ್ತ್ಕೊಂಡಿದೀನಿ. ಅದರಲ್ಲಿರೋ ಒಂದು (ವಿಚಿತ್ರ) ಪ್ರಶ್ನೆಗೆ ನನ್ನ ಮಿತ್ರ ಅಕ್ಷಯ್ ನದು ಸಚಿತ್ರ ಉತ್ರ ಇದೆ.
"ನನ್ನೊಂದಿಗಿನ ನಿನ್ನ ಸವಿನೆನಪುಗಳು",
ಎರಡು ಮರಗಳಿರೋ ಒಂದು ಸುಂದರವಾದ ಫೋಟೋ ಹಚ್ಚಿ
ಅನಾಮತ್ ಎರಡು ಪೇಜ್ ಪೂರ್ತಿ ಬರೆದಿದ್ದಾನೆ. ಆ ಮರಗಳನ್ನ ನಮ್ಮಿಬ್ಬರಿಗೆ ಹೋಲಿಸಿ ಅದ್ಬುತವಾಗಿ ನೆನಪುಗಳನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾನೆ.
ನಾವಿಬ್ಬರೂ ವಾದ someವಾದ ಮಾಡೋದು ಸ್ವಲ್ಪ ಜಾಸ್ತಿನೇ. ಯಾ
ವುದೇ ವಿಷಯಕ್ಕಾದರೂ ಅರ್ಥವಿರುವ(ದ) ಚರ್ಚೆ ಮಾಡ್ತೀವಿ. ನಮ್ಮ ಗೆಳೆತನ ಮತ್ತವನ ಬಗ್ಗೆ ಇನ್ನೊಮ್ಮೆ ಹೇಳ್ತೀನಿ, ಈಗ ಪೀಟಿಕೆಯ ಮೂಲಕ್ಕೆ ಬರೋಣ. ಏನೋ ಮಾತಡುವಾಗ ಆ ಫೋಟೋದ ವಿಷಯ ಬರಲು ಅವ್ನು ನನಗೆ ಅದರ ಮೇಲೆ ತಾನು ಬರೆದ ರೀತಿ, ದಾಟಿ, ಕಲ್ಪನೆ ಬಿಟ್ಟು ಬೇರೇನನ್ನಾದರೂ ಬರೆಯಲು ಹೇಳಿದ. "ಏನು ಬರೆಯೋದು??" ಯೋಚನೆಗೆ ಬಿದ್ದೆ. ಅವನು ಬರೆದಷ್ಟು ಚೆನ್ನಾಗಲ್ಲದಿದ್ದರೂ ಏನಾದರೂ ಡಿಫರೆಂಟ್ ಆಗಿ ಬರೆಯೋ ಯೋಚನೆಯಲ್ಲಿರುವಾಗ ಮೂಡಿ ಬಂದಿದ್ದೇ ಈ ಕವಿತೆ...




ಹುಚ್ಚು ಮನುಜನ, ತುಚ್ಛ ಆಸೆಗೆ ಬಲಿಯಾದೆವು ನಾವು
ತನ್ನ ಮನಸಿನ, ಸಣ್ಣ ಕನಸಿಗೂ ಕೊಡುತಿಹನವನು ನೋವು;
ಇದು ಒಂದು ಬದುಕೇ?
ಕೊನೆ ಎಂದು ಇದಕೆ?
ದಯಮಾಡಿ ಹೇಳುವಿರಾ ನೀವು....

ಹಚ್ಚ ಹಸಿರನು, ಬೆಚ್ಚಗೆ ಹೊದ್ದಿಹ ಭೂಮಿಯೇ ಕೇಳೆಯಾ
ಬಣ್ಣದ ಬಾನಲಿ, ತಣ್ಣನೆ ಕುಳಿತಿಹ ಸೂರ್ಯನೇ ಕಾಣೆಯಾ
ಈ ನಮ್ಮ ವ್ಯಥೆಯಾ
ಕೊರಗಿನಾ ಕಥೆಯಾ
ದಯಮಾಡಿ ಕೊಡಿಸೆರಾ ಮುಕುತಿಯಾ....

ವಡ್ದ ಹಟದಲಿ, ಸೆಡ್ಡು ಹೊಡೆದರೆ ಸುಮ್ಮನಿರುವುದೇ ಪರಿಸರ
ಜಾಸ್ತಿ ಕೆಣಕಲು, ಶಾಸ್ತಿ ಮಾಡ್ವುದು ಸಾಕು ನಿಲ್ಲಿಸು ಓ ನರ
ವೃಕ್ಷಗಳ ಉಳಿಸು
ಸಸ್ಯಗಳ ಬೆಳೆಸು
ನಿನ್ನ ಬಾಳಾಗುವುದು ಬಂಗಾರ....

-ನಿಮ್ಮವ

Thursday, March 4, 2010

ನೋ ಸ್ಮೋಕಿಂಗ್...!



ಎಲ್ಲೆಂದ್ರಲ್ಲಿ
ಮಾಡ್ಬಾರ್ದಂತೆ
ಧೂಮಪಾನ:
ಮಾಡಿದ್ರೂನೂ
ಕಾಣ್ದಾ೦ ಗಿರ್ಲಿ
ಜೋಪಾನ....

[ಸಾರ್ವಜನಿಕ ಜಾಗಗಳಲ್ಲಿ ಧೂಮಪಾನ ನಿಷೇಧಿಸಿದಾಗ ಬರೆದದ್ದು]

ಬರೆಯದೇ ಬೋರಾಗಿದೆ..!!



ಇಷ್ಟು ದಿನ ನನಗೆ ಟೈಮೇ ಇರ್ಲಿಲ್ವಾ?
ಇಲ್ಲಾ
ಬರೆಯೋಕೆ ಏನೂ ಇರ್ಲಿಲ್ವಾ??

ಕಾರಣ ಇದಾವುದೂ ಅಲ್ಲಾ. ಆದ್ರೂ ಏನೂ ಬ್ಲಾಗಿಸಿರಲಿಲ್ಲಾ. ಏನೂ ಬರೆಯದೇ ತುಂಬಾ ಬೋರಾಗಿದೆ. ಮನಸ್ಸಿನ ಮೂಲೆಯಲ್ಲಿಏನೋ ಚಡಪಡಿಕೆ, ಬರೆಯೋ ಕನವರಿಕೆ. ಕನವರಿಕೆಯ ನಿವಾರಿಕೆಗೆ ಏನಾದರೂ ಬ್ಲಾಗಿಸೋ ಗಟ್ಟಿ ಮನಸ್ಸು ಮಾಡಿ, ಆಲಸಿತನವನ್ನೆಲ್ಲಾ ಗಂಟು ಕಟ್ಟಿ ಮೆಲಿಟ್ಟು ಕೀಲಿ ಮಣೆ ಕುಟ್ತಾ ಇದೀನಿ. ನಾನು ಕುಟ್ಟೋ ಕಟ್ ಕಟ್ ಶಬ್ದದಲ್ಲಿ ಪೆಟ್ಟು ತಿನ್ತಿರೋಬಡಪಾಯಿ ಬಟನ್ ಕೂಗು ಮುಚ್ಚಿ ಹೋಗಿದೆಯೇನೋ. ಆದರೂ ಇದಾವುದೂ ನನ್ನ ಹುರುಪು ಹುಮ್ಮಸ್ಸಿಗೆ ತಡೆಯೊಡ್ಡುತಿಲ್ಲ. ಈಗನನಗಿರುವುದು ಒಂದೇ ಗುರಿ; ಏನಾದರೂ ಬರಿ...

ತನ್ನ ಮೇಲೆ ತಾನೇ ಮುನಿಸಿಕೊಂಡಂತೆ ಮುದುಡಿ ಕುಳಿತಿರೋ ಮನಸ್ಸನ್ನ ಪೂಸಿ ಹೊಡೆದು ಹೊಸ ಹುಮ್ಮಸ್ಸು ತುಂಬಲುಏನಾದ್ರೂ ಗೀಚ್ತಿರ್ತೀನಿ. ಅವನ್ನೆಲ್ಲಾ ಬ್ಲಾಗಿಸಬೇಕೆಂಬ ದಾವಂತ. ಏಕೆಂದರೆ " ಹೇಳುವುದು ತುಂಬಾ ಉಳಿದು ಹೋಗಿದೆ, ಹೇಳಲಿಹೇಗೆ ತಿಳಿಯದಾಗಿದೆ ..". ಹಳೆ ಡೈರಿ ತೆಗೆದು ಇಷ್ಟು ದಿನ ಬರೆದಿಟ್ಟ ಕೆಲವು ಚುಟುಕು, ಕವನ, ಹಾಡುಗಳನ್ನು ಬ್ಲಾಗಿಸುತ್ತೇನೆ. ಇವಿಷ್ಟನ್ನೂ ಹೇಳೋವಾಗ ಏನೋ ಅನಿಸ್ತಾ ಇದೆ ಗೊತ್ತಾ?? ಮನಸ್ಸು, ಅದರ ವಿಚಾರ, ಯೋಚನೆ, ಚಿಂತೆ, ಎಷ್ಟು ವಿಚಿತ್ರಅಲ್ವಾ? ಏನೋ ಮಾಡ್ತಿರ್ತೀವಿ ಆದ್ರೆ ಮನ್ಸು ಎಲ್ಲೋ ಇರತ್ತೆ. ಏನೇನೋ ಯೋಚ್ನೆಗಳು ಬೇರೆ. ಮನ್ಸು ಹೀಗೆ ಇರ್ಬೇಕುಇವುಗಳನ್ನಷ್ಟೇ ಯೋಚಿಸ್ಬೇಕು ಅಂತಾ control ಮಾಡಕಾಗತ್ತಾ ಇಲ್ಲಾ ರೂಲ್ಸೋ Law ನೋ ಮಾಡಿ ಫಾಲೋ ಮಾಡಕಾಗತ್ತಾಇಲ್ಲ ಅಲ್ವಾ?? ಈಗ್ಲೇ ನೋಡಿ ಏನೋ ಹೇಳ್ತಾ ಇದ್ದೆ, ಎಲ್ಲೋ ಬಂದಿದೀನಿ...

ಚಿತ್ತದ ಚಿಂತೆಯ ನಿಯಂತ್ರಿಸಲು
ಸಾಧ್ಯವಾಗದು ಯಾವ LAW ಗೂ;
ಚಿಂತೆಯೇ ಇಲ್ಲದಂತೆ ಚಿತ್ತವನ್ನಿರಿಸಲು
ಸಾಧ್ಯವಾಗಿಸೋದು ಈ ಬ್ಲಾಗು..
-ನಿಮ್ಮವ